ಸಂಘವು ಉಡುಪಿ ನಗರದ ಮಿಷನ್ ಕಂಪೌಂಡ್ನಲ್ಲಿರುವ ಸ್ವಂತ ಕಟ್ಟಡವಾದ ‘ಚೇತನಾ’ ವಾಣಿಜ್ಯ ಸಂಕೀರ್ಣದಲ್ಲಿ ಸಂಪೂರ್ಣ ಗಣಕೀರಕೃತ ಆಡಳಿತ ಕಛೇರಿಯನ್ನು ಹೊಂದಿದ್ದು, ಅದರಲ್ಲಿರುವ 14 ಕೊಠಡಿಗಳನ್ನು ವಿವಿಧ ಉದ್ದೇಶಗಳಿಗಾಗಿ ಇತರರಿಗೆ ಬಾಡಿಗೆಗೆ ನೀಡಲಾಗಿದೆ. ಸಂಘವು ಉಡುಪಿಯಲ್ಲಿ ಸಂಪೂರ್ಣ ಹವಾನಿಯಂತ್ರಿತ ಪ್ರಧಾನ ಕಛೇರಿ ಹಾಗೂ ಮುಖ್ಯ ಶಾಖೆಯನ್ನು ಒಳಗೊಂಡಂತೆ ಸಂಪೂರ್ಣ ಗಣಕೀಕೃತ ಇಂದ್ರಾಳಿ, ಬೈಲೂರು-ಕೊರಂಗ್ರಪಾಡಿ, ಉದ್ಯಾವರ, ಅಂಬಾಗಿಲು ಹಾಗೂ ಉಡುಪಿ ಹೃದಯ ಭಾಗದಲ್ಲಿ ಸಿಟಿ ಶಾಖೆ ಹೀಗೆ ಆರು ಶಾಖೆಗಳನ್ನು ಒಳಗೊಂಡು ಕಾರ್ಯ ನಿರ್ವಹಿಸುತ್ತಿದೆ. ಇವುಗಳಲ್ಲಿ ಇಂದ್ರಾಳಿ ಹಾಗೂ ಸಿಟಿ ಶಾಖೆಗಳು ಸ್ವಂತ ಕೊಠಡಿಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸಂಘದ ಪ್ರಮುಖ ಅಗತ್ಯತೆಗಳಲ್ಲಿ ಒಂದಾದ ಸಭಾಭವನವನ್ನು ಸಂಘದ ಸ್ಥಾಪಕರಾದ ಕಟಪಾಡಿ ಬೀಡು ದಿ| ಜಗನ್ನಾಥ ಬಲ್ಲಾಳರ ಸವಿನೆನಪಿಗಾಗಿ “ಜಗನ್ನಾಥ ಸಭಾಭವನ” ನಾಮಧೇಯದಲ್ಲಿ, ಸುಸಜ್ಜಿತವಾಗಿ ಸುಮಾರು 4೦೦ ರಿಂದ 6೦೦ ಆಸನವನ್ನು ಅಳವಡಿಸುವಂತೆ ರಚನೆ ಮಾಡಲಾಗಿದೆ.