Badagabettu Society

ಫಲಾನುಭವಿಗಳಿಗೆ ಉಚಿತ ನೋಟ್ ಪುಸ್ತಕ , ಆರೋಗ್ಯ ಕಾರ್ಡ್ ಹಾಗೂ ಬೈಸಿಕಲ್ ವಿತರಣಾ ಸಮಾರಂಭ

ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಜರಗಿದ ಸಮಾರಂಭದಲ್ಲಿ ಸುಮಾರು ರೂ. 15 ಲಕ್ಷ ಮೌಲ್ಯದ 50 ಸಾವಿರಕ್ಕಿಂತಲೂ ಅಧಿಕ ನೋಟ್ ಪುಸ್ತಕವನ್ನು ಜಿಲ್ಲೆಯ 100 ಕನ್ನಡ ಮಾಧ್ಯಮ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡಲಾಯಿತು. ಲಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆ ಇವರೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಂಘದ ಸದಸ್ಯರಿಗೆ, ಗ್ರಾಹಕರಿಗೆ ಅನುಕೂಲವಾಗುವಂತೆ “ಲಂಬಾರ್ಡ್ ಆರೋಗ್ಯ ಕಾರ್ಡ್”ನ್ನು 1900 ಸದಸ್ಯರಿಗೆ ವಿತರಿಸಲಾಯಿತು. ಡಾ| ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಉಡುಪಿ ಇದರ ಸಭಾಂಗಣಕ್ಕೆ ಸಂಘದ ವತಿಯಿಂದ 200 ಆಸನಗಳನ್ನು, ಡಾ.ಬಿ.ಆರ್ ಅಂಬೇಡ್ಕರ್ ಯುವಕ ಮಂಡಲ, ಚೆಂಡ್ಕಳ, ಕೊಡವೂರು ಇವರಿಗೆ ಸಂಘದ ವತಿಯಿಂದ 50 ಆಸನಗ¼ನ್ನು ವಿತರಿಸಲಾಯಿತು. ಅಲ್ಲದೆ ಸಂಘದ ವತಿಯಿಂದ ಆರ್ಥಿಕ ಸಹಾಯ ವಿತರಣಾ ಕಾರ್ಯಕ್ರಮ ನೆರವೆರಿತು. ಗೋ-ಗ್ರೀನ್ ಅಭಿಯಾನದಡಿ ಇಂಧನ ಉಳಿತಾಯ ಹಾಗೂ ಪರಿಸರ ಮಾಲಿನ್ಯ ತಡೆಗೆ ಒತ್ತು ನೀಡುವ ಉದ್ದೇಶದಿಂದ ಸಂಘದ ಸಿಬ್ಬಂದಿಗಳಿಗೆ ಸೈಕಲ್ ವಿತರಿಸುವ ಕಾರ್ಯಕ್ರಮವು ಕೂಡಾ ಜರಗಿತು.

ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಜರಗಿದ ಸಮಾರಂಭದಲ್ಲಿ ಸುಮಾರು ರೂ. 15 ಲಕ್ಷ ಮೌಲ್ಯದ 50 ಸಾವಿರಕ್ಕಿಂತಲೂ ಅಧಿಕ ನೋಟ್ ಪುಸ್ತಕವನ್ನು ಜಿಲ್ಲೆಯ 100 ಕನ್ನಡ ಮಾಧ್ಯಮ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡಲಾಯಿತು. ಲಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆ ಇವರೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಂಘದ ಸದಸ್ಯರಿಗೆ, ಗ್ರಾಹಕರಿಗೆ ಅನುಕೂಲವಾಗುವಂತೆ “ಲಂಬಾರ್ಡ್ ಆರೋಗ್ಯ ಕಾರ್ಡ್”ನ್ನು 1900 ಸದಸ್ಯರಿಗೆ ವಿತರಿಸಲಾಯಿತು. ಡಾ| ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಉಡುಪಿ ಇದರ ಸಭಾಂಗಣಕ್ಕೆ ಸಂಘದ ವತಿಯಿಂದ 200 ಆಸನಗಳನ್ನು, ಡಾ.ಬಿ.ಆರ್ ಅಂಬೇಡ್ಕರ್ ಯುವಕ ಮಂಡಲ, ಚೆಂಡ್ಕಳ, ಕೊಡವೂರು ಇವರಿಗೆ ಸಂಘದ ವತಿಯಿಂದ 50 ಆಸನಗ¼ನ್ನು ವಿತರಿಸಲಾಯಿತು. ಅಲ್ಲದೆ ಸಂಘದ ವತಿಯಿಂದ ಆರ್ಥಿಕ ಸಹಾಯ ವಿತರಣಾ ಕಾರ್ಯಕ್ರಮ ನೆರವೆರಿತು. ಗೋ-ಗ್ರೀನ್ ಅಭಿಯಾನದಡಿ ಇಂಧನ ಉಳಿತಾಯ ಹಾಗೂ ಪರಿಸರ ಮಾಲಿನ್ಯ ತಡೆಗೆ ಒತ್ತು ನೀಡುವ ಉದ್ದೇಶದಿಂದ ಸಂಘದ ಸಿಬ್ಬಂದಿಗಳಿಗೆ ಸೈಕಲ್ ವಿತರಿಸುವ ಕಾರ್ಯಕ್ರಮವು ಕೂಡಾ ಜರಗಿತು.