ಉಡುಪಿಯ ಪ್ರತಿಷ್ಟಿತ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸಾೈಟಿಯು 9ನೇ ಅಖಿಲ ಕರ್ನಾಟಕ ತುಳು ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಶತಮಾನದ ಶ್ರೇಷ್ಠ ಸಾಂಸ್ಥಿಕ ಗೌರವ ಪ್ರಶಸ್ತಿಗೆ ಭಾಜನವಾಯಿತು. ಪ್ರಶಸ್ತಿಯನ್ನು ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಜಯಕರ ಶೆಟ್ಟಿ ಇಂದ್ರಾಳಿಯವರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಾದವೈಭವಂ ವಾಸುದೇವ ಭಟ್, ಕರ್ನಾಟಕ ಸಿನಿಮಾ ಸೆನ್ಸರ್ ಮಂಡಳಿ ಸದಸ್ಯರಾದ ಜಯಪ್ರಕಾಶ್ ಅರ್ ಶೆಟ್ಟಿ, ವಿಶ್ವನಾಥ ಶೆಣೈ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕರಾದ ಜಯಕರ ಶೆಟ್ಟಿ ಇಂದ್ರಾಳಿ, ಅಖಿಲ ಕರ್ನಾಟಕ ತುಳು ಬೆಳದಿಂಗಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಶೇಖರ್ ಅಜೆಕಾರು ಉಪಸ್ಥಿತರಿದ್ದರು.